ಮೂಲಭೂತ ಸೌಕರ್ಯಗಳಾದ ನೀರು, ಕೈಗೆಟುಕುವ ಬೆಲೆಯಲ್ಲಿ ದಿನಸಿ ಮತ್ತು ತರಕಾರಿಗಳು, ಬಳಸಲು ಅರ್ಹವಾದ ರಸ್ತೆಗಳು, ಯೋಗ್ಯವಾದ ಚರಂಡಿ ವ್ಯವಸ್ಥೆ, ದಿನನಿತ್ಯದ ಕೆಲಸಗಳಿಗೆ ಭರಿಸಬಹುದಾದ ಸಾರಿಗೆ ವ್ಯವಸ್ಥೆ, ಆದಾಯಕ್ಕನುಸಾರವಾಗಿ ಎಲ್ಲಾ ಮಕ್ಕಳಿಗೆ ಏಕರೂಪದ ಶಿಕ್ಷಣ, ಅರ್ಹತೆಗನುಗುಣವಾಗಿ ಎಲ್ಲರಿಗೆ ಉದ್ಯೋಗ!!. ಏನೋ ಕನಸಿನ ಲೋಕದಲ್ಲಿ ವಿಹಾರಕ್ಕೆ ಕರೆದೊಯ್ದ ಅನುಭವ ಆಗ್ತಿದಿಯಾ?! ಖಂಡಿತ ಇಲ್ಲಾ, ಯಾವುದೇ ಪ್ರದೇಶದ(ಹಳ್ಳಿ, ಪಟ್ಟಣ, ನಗರ) ಅಭಿವೃದ್ದಿಯನ್ನ ಅಳೆಯುವುದು ಮೇಲಿನವುಗಳ ಲಭ್ಯತೆಯ ಮೇಲೆಯೇ.
ಆದರೆ ಅದಕ್ಕೆ ತದ್ವಿರುದ್ದವಾಗಿ ಅಭಿವೃದ್ದಿಯ ನೆಪದಲ್ಲಿ ಕೇವಲ ಆಡಳಿತಾಶಾಹಿಗಳ, ಹುಂಬ ಶ್ರೀಮಂತರ, ಸುಲಿಗೆಕೋರರ, ಕಟು ಸ್ವಾರ್ಥಿಗಳ ಆಡಂಬರದ ಜೀವನಕ್ಕೆ ದಾರಿ ಮಾಡಿಕೊಟ್ಟಂತ್ತಾಗಿದೆ. ಅಭಿವೃದ್ದಿ ಎಂದರೆ ನಗರದಲ್ಲಿ ಎಷ್ಟು ಮಲ್ಟಿಪ್ಲೆಕ್ಸ್, ಎಷ್ಟು ಶಾಪಿಂಗ್ ಮಾಲ್, ಮಜಾ ಮಾಡಲು ಎಷ್ಟು ಪಬ್, ಹಣ ಕಳೆಯಲು ಎಷ್ಟು ಸ್ಟಾರ್ ಹೋಟೆಲ್, ತಿರುಗಾಡಲು ಎಷ್ಟು ವೋಲ್ವೋ ಬಸ್, ಯಾವ ಯಾವ ಏರಿಯಾದಲ್ಲಿ ಎಷ್ಟೆಷ್ಟು ಸೈಟು ಕೊಳ್ಳೆ ಹೊಡೆದು ಹಂಚಲಾಗಿದೆ ಅನ್ನುವುದಲ್ಲ. ಅಭಿವೃದ್ದಿಯೆಂಬುದು ಅನಾಥರ, ದೀನರ, ನೊಂದವರ ಉನ್ನತ್ತೀಕರಣಕ್ಕೆ ನೆರವಾಗಬೇಕು. ಪ್ರತಿಯೊಬ್ಬರಿಗೂ ಸಮಾನವಾಗಿ ಸಂಪನ್ಮೂಲಗಳ ಹಂಚಿಕೆಯಾಗಬೇಕು. ಮನುಷ್ಯ ಮನುಷ್ಯರ ನಡುವೆ ಪ್ರೀತಿ ಆದರಗಳು ಬೆಳೆಯಬೇಕು. ಎಲ್ಲರಲ್ಲಿರುವ ತುಚ್ಚ ನೀಚ ಸ್ವಾರ್ಥ ಕಡಿಮೆಯಾಗಬೇಕು.
ಇದನೆಲ್ಲ ಸಾಕಾರಗೊಳಿಸುವ ಸಾಮರ್ಥ್ಯ ಇರುವುದು ಕೇವಲ ವಿದ್ಯಾವಂತ ಯುವಕರಿಗೆ ಮಾತ್ರ. ಮೊದಲು ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗಳ ಆಯ್ಕೆಗೆ ವೋಟು ಹಾಕಬೇಕು ಹಾಗೂ ಮನೆಯವರಿಗೆ, ಅಕ್ಕಪಕ್ಕದಲ್ಲಿರುವ ಅನಕ್ಷರಸ್ಥರಿಗೆ ಅರಿವು ಮೂಡಿಸಬೇಕು. ದುಡಿಯುತ್ತಿರುವ ಯುವಕರು ದೇಶಾದ್ಯಂತ ನಿರ್ಗತಿಕರ ಉನ್ನತಿಗೆ ಶ್ರಮಿಸುತ್ತಿರುವ ಚಾರಿಟಿಗಳಿಗೆ ಕೈಲಾದ ಸಹಾಯ ಮಾಡಬೇಕು. ಅನ್ಯಾಯ ಅಕ್ರಮಗಳ ವಿರುದ್ದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ನಗರಗಳಿಗೆ ವಿಲಾಸಿ ಜೀವನದ ಆಸೆಯಿಂದ ವಲಸೆ ಬರುವುದನ್ನು ಬಿಟ್ಟು ವ್ಯವಸಾಯದಂಥ ಶ್ರೇಷ್ಠ ಕೆಲಸವನ್ನ
ಮುಂದುವರೆಸಿ ಇತರರಿಗೆ ಮಾದರಿಯಾಗಬೇಕು. ಪಠ್ಯ ಪುಸ್ತಕದ ಜ್ಞಾನಕ್ಕಿಂತ ಸಾಮಾನ್ಯ ಜ್ಞಾನ ಮುಖ್ಯ ಎಂಬುದು ತಿಳಿದುಕೊಳ್ಳಬೇಕು.
ನೀನೆ ಅಭ್ಯರ್ಥಿಯಾಗಿ ನಿ೦ತಲ್ಲಿ ನಮ್ಮೆಲ್ಲರ ಮತ ಸಿಗುವುದು ಖ೦ಡಿತ! ನೀನು ಹೇಳೋದೇನೋ ಸರಿಯಾಗೇ ಇದೆ ಆದರೆ ಪಾಲಿಸುವವರು ಯಾರು ಅನ್ನೋದೇ ಪ್ರಶ್ನೆ. ಆರ೦ಭ ಎಲ್ಲೋ ಆಗಲೇ ಬೇಕು, ನಿನ್ನಿ೦ದಲೆ ಏಕಾಗಬಾರದು ?? ಬರವಣಿಗೆ ಚೆನ್ನಾಗಿದೆ. ಇ೦ತಹ ಸಮಾಜೋದ್ಧಾರದ ಲೇಖನಗಳನ್ನು ಬರೆದು ಎಲ್ಲರನ್ನು ಎಚ್ಚರಿಸುವ ಪ್ರಯತ್ನ ಒಳ್ಳೆಯದು . ಮು೦ದಿನ ಬ್ಲಾಗ್ ಯಾವುದರ ಬಗ್ಗೆ - "ಮುಗಿಲಿನೆತ್ತರಕ್ಕೆ ಏರುತ್ತಿರುವ ಬೆಳೆಗಳ " ಕುರಿತಾಗಿರುವುದೇ ?? :)
ಪ್ರತ್ಯುತ್ತರಅಳಿಸಿಸತ್ಯ ಸರ್
ಪ್ರತ್ಯುತ್ತರಅಳಿಸಿ